Thursday, April 1, 2010

ಸಂಚಾರ: ಪಟ್ಟದಕಲ್ಲು

ಯುನೆಸ್ಕೋ ’ವರ್ಲ್ಡ್ ಹೆರಿಟೇಜ್ ಸೈಟ್’ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪಟ್ಟದಕಲ್ಲು ಬಾಗಲಕೋಟೆ ಜಿಲ್ಲೆಯ, ಮಲಪ್ರಭಾ ನದಿಯ ದಂಡೆಯಲ್ಲಿರುವ ಪ್ರೇಕ್ಷಣೀಯ ಸ್ಥಳ. ೮ ನೇ ಶತಮಾನದಲ್ಲಿ ಚಾಲುಕ್ಯ ಸಂಸ್ಥಾನದ ರಾಜಧಾನಿಯಾಗಿತ್ತು ಪಟ್ಟದಕಲ್ಲು.

ದ್ರಾವಿಡ, ಚಾಲುಕ್ಯ ಹಾಗೂ ಉತ್ತರ ಭಾರತದ ಶೈಲಿಯ ಕೆತ್ತನೆಗಳಿಂದ ತುಂಬಿರುವ ದೇವಸ್ಥಾನಗಳ ಸಮೂಹ ಇಲ್ಲಿನ ಪ್ರಮುಖ ಆಕರ್ಷಣೆ.







ಯುದ್ಧದಲ್ಲಿ ವಿಜಯದ ನೆನಪಿಗಾಗಿ ನಿರ್ಮಿಸಿರುವ ಹಳೆಗನ್ನಡದ ಶಾಸನ ಇಲ್ಲಿನ ಇನ್ನೊಂದು ವಿಶೇಷ.






ಬದಾಮಿಯಿಂದ 22 ಕಿ.ಮೀ., ಐಹೊಳೆಯಿಂದ 10 ಕಿ.ಮೀ., ಬಾಗಲಕೋಟೆಯಿಂದ ಸುಮಾರು 35 ಕಿ.ಮೀ ದೂರದಲ್ಲಿದೆ ಪಟ್ಟದಕಲ್ಲು.

ದಾಳಿಕೋರರ ಲೂಟಿಯಿಂದ, ಬಿಸಿಲು-ಮಳೆಯಿಂದ ಇಲ್ಲಿನ ಹೆಚ್ಚಿನ ಕೆತ್ತನೆಗಳು ಘಾಸಿಗೊಂಡಿವೆ. ಈಗ ಆರ್ಕಿಯಾಲಜಿ ಸಂಸ್ಥೆಯ ಅಧೀನದಲ್ಲಿ ಇಲ್ಲಿನ ಮನಮೋಹಕ ದೇವಸ್ಥಾನಗಳ ಸಮೂಹ ಸಂರಕ್ಷಿಸಲ್ಪಟ್ಟಿದೆ.

ಚಿತ್ರಗಳು: ನೆಂಪು ಗುರು
-o-

2 comments:

Govinda Nelyaru said...

ತುಂಬಾ ಚೆನ್ನಾಗಿತ್ತು. ಪರದೇಶಗಳಲ್ಲಾದರೆ ಇವು ಪ್ರಸಿದ್ದ ಪ್ರವಾಸಿ ತಾಣವಾಗಿ ಸಾವಿರಾರು ಪ್ರವಾಸಿಗಳ ಆಕರ್ಶಿಸುತಿತ್ತು.

Nempu Guru said...

ಧನ್ಯವಾದಗಳು.