Tuesday, April 6, 2010

ಸಂಚಾರ: ದೆಹಲಿಯ ಇಂಡಿಯಾ ಗೇಟ್

ಇಂಡಿಯಾ ಗೇಟ್ ಭಾರತದ ರಾಷ್ಟ್ರೀಯ ಸ್ಮಾರಕ. ಯುದ್ಧದಲ್ಲಿ ಮಡಿದ ಸಹಸ್ರಾರು ಯೋಧರ ಬಲಿದಾನವನ್ನು ಸ್ಮರಿಸಲು ನಿರ್ಮಿಸಿದ ಸ್ಮಾರಕ.





ದೆಹಲಿಯ ಹೃದಯ ಭಾಗದಲ್ಲಿರುವ ೪೨ ಮೀ ಎತ್ತರದ ಇಂಡಿಯಾ ಗೇಟ್ ನ ಮೂಲಕ ಪ್ರಮುಖ ರಸ್ತೆಗಳು ಹಾದುಹೋಗುತ್ತವೆ. ಇದರಲ್ಲಿ ಮುಖ್ಯವಾದದ್ದು ರಾಜ್ ಪಥ್ - ಗಣರಾಜ್ಯೋತ್ಸವದ ಪೆರೇಡ್ ನಡೆಯುವ ಸ್ಥಳ.


ಇಂಡಿಯಾ ಗೇಟ್ ಮೂಲತಃ ಬ್ರಿಟಿಷ್ ವಸಾಹತು ಶಾಹಿಯ ಕಾಲದಲ್ಲಿ ೧ನೇ ಮಹಾಯುದ್ಧ, ಇನ್ನಿತರ ಯುದ್ಧಗಳಲ್ಲಿ ಮಡಿದ ೯೦,೦೦೦ ಸೈನಿಕರ ನೆನಪಿಗಾಗಿ ನಿರ್ಮಿಸಿದ ಸ್ಮಾರಕ. ಇದರ ಮೂಲ ನಿರ್ಮಾತೃ ಸರ್ ಎಡ್ವಿನ್ ಲುತ್ಯೆನ್ಸ್.


೧೯೭೧ ರಲ್ಲಿ ಭಾರತ ಸರಕಾರ ಇಂಡೋ-ಪಾಕ್ ಯುದ್ಧದಲ್ಲಿ ಹುತಾತ್ಮರಾದ ಸಹಸ್ರಾರು ಯೋಧರ ನೆನಪಿಗಾಗಿ ’ಅಮರ್ ಜವಾನ್ ಜ್ಯೋತಿ’ಯನ್ನು ಪ್ರತಿಷ್ಠಾಪಿಸಿ ಇಂಡಿಯಾ ಗೇಟನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಿತು.


ಪರಮವೀರಚಕ್ರ ಪಡೆದ, ದೇಶಕ್ಕಾಗಿ ಹೋರಾಡಿ ಪ್ರಾಣತೆತ್ತ ಯೋಧರ ಹೆಸರನ್ನು ಇಂಡಿಯಾ ಗೇಟಿನ ಗೋಡೆಗಳಲ್ಲಿ ಕಾಣಬಹುದು.


ಚಿತ್ರಗಳು: ನೆಂಪು ಗುರು
-o-

No comments: